ಶ್ರೀನಿವಾಸಪುರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಹಸಿವಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಭಾರತ್ ಅಕ್ಕಿಯನ್ನು ₹ 29 ದರದಲ್ಲಿ ನೀಡುತ್ತಿದ್ದಾರೆ. ಈ ಯೋಜನೆ ಸದುಪಯೋಗಪಡಿಸಿಕೊಳ್ಳಿ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ಹೇಳಿದರು.
ಪಟ್ಟಣದ ಬೆಸ್ಕಾಂ ಮುಂಭಾಗದ ಕೊಟೆಕ್ ಬ್ಯಾಂಕ್ ಬಳಿ ಶುಕ್ರವಾರ ತಾಲ್ಲೂಕು ಬಿಜೆಪಿಯಿಂದ ಭಾರತ್ ಅಕ್ಕಿಯ ಮಾರಾಟಕ್ಕಾಗಿ ಚಾಲನೆ ನೀಡಿ ಮಾತನಾಡಿದರು.
‘ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಪ್ರಸ್ತುತ 2ಸಾವಿರ ಮೂಟೆಯನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ತಕ್ಕಂತೆ ವಿತರಣೆ ಮಾಡಲಾಗುವುದು’ ಎಂದರು.
ತಾಲ್ಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್, ಮುಖಂಡರಾದ ನಲ್ಲಪಲ್ಲಿ ರೆಡ್ಡಪ್ಪ, ಜೆಸಿಬಿ ಅಶೋಕ್ರೆಡ್ಡಿ, ರವಣಪ್ಪ ಇದ್ದರು.