ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮರೆತ ಪೊಲೀಸರು ಅಪಘಾತ ಮಾಡಿ ಬಸ್ ಹತ್ತಿದರು

ಅಪಘಾತ ಮಾಡಿ ಬಸ್ ಹತ್ತಿದರು, ಗಾಯಾಳು ಸಾವು
Last Updated 4 ಮೇ 2018, 19:57 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಸಂತೇಮರಹಳ್ಳಿ ಹೋಬಳಿಯ ಬಸವಟ್ಟಿ ಗೇಟ್ ಬಳಿ ಶುಕ್ರವಾರ ಪೊಲೀಸ್ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಶಂಭುಲಿಂಗಪ್ಪ (45) ಮೃತಪ‍ಟ್ಟಿದ್ದಾರೆ.

ಕರ್ತವ್ಯ ಹಾಗೂ ಮಾನವೀಯತೆ ಎರಡನ್ನೂ ಮರೆತ ಪೊಲೀಸರು ವಾಹನವನ್ನು ಸ್ಥಳದಲ್ಲೇ ಬಿಟ್ಟು, ಅದೇ ಮಾರ್ಗದಲ್ಲಿ ಬಂದ ಬಸ್‌ ಹತ್ತಿ ಹೋಗಿದ್ದಾರೆ. ಬಳಿಕ ಗ್ರಾಮಸ್ಥರೇ ಆಂಬುಲೆನ್ಸ್‌ ತರಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಪೊಲೀಸರ ನಡವಳಿಕೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT