ಈ ರಸ್ತೆಯ ಮೂಲಕ ಸಿದ್ದನಹಳ್ಳಿ, ಕುರುಬರಹಳ್ಳಿ, ಇರುಗಮುತ್ತನಹಳ್ಳಿ, ಪೆರಮಾಕನಹಳ್ಳಿ ಮೂಲಕ ಬೈರಕೂರು ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಕಾಲ್ನಾಡಿಗೆಯಲ್ಲಿ ನಡೆಯುವುದಕ್ಕೆ ಆಗುವುದಿಲ್ಲ. ಸಮಸ್ಯೆ ಎದುರಾದಾಗ ಪಂಚಾಯಿತಿಯವರು ಮಣ್ಣು ಹಾಕಿ ಶೋಕಿ ಮಾಡುತ್ತಾರೆ ಹೊರತು ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸುಲು ಮುಂದಾಗುವುದಿಲ್ಲ ಎಂದು ಆರೋಪಿಸಿದರು.