ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲು ಏರಿಕೆಯಾಗುತ್ತಲೇ ಇದೆ. ಅರೆಝಳದ ಸಂಕಟ ತಡೆಯಲಾಗದೆ ಜನ ತಂಪಿನ ಮೊರೆ ಹೋಗುತ್ತಿದ್ದಾರೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಎ.ಸಿ. ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಫ್ಯಾನ್ಗಳೂ ಇಲ್ಲ. ಚಿಕಿತ್ಸೆಗಾಗಿ ದಾಖಲಾಗಿರುವ ಮಕ್ಕಳು ಹಾಗೂ ಅವರ ಪೋಷಕರು ಬಿಸಿಲಿನ ಝಳಕ್ಕೆ ಆಸ್ಪತ್ರೆಯೊಳಗೆ ಸಂಕಟ ಅನುಭವಿಸುವಂತಾಗಿದೆ.