ಸರ್ವ ಜನತಾ ಪಕ್ಷದ ಅಭ್ಯರ್ಥಿ ಜಿ. ಅನೋಜಿ ರಾವ್ ಬಿ.ಎ. ದ್ವಿತೀಯ ವರ್ಷ ಮಾತ್ರ ಮುಗಿಸಿದ್ದರೆ, ಪಕ್ಷೇತರರಾಗಿರುವ ಕರಡಿ ಬಸವರಾಜ ಬಿ.ಎ., ಎಸ್ಯುಸಿಐ ಸೋಷಲಿಸ್ಟ್ ಪಕ್ಷದ ಶರಣಪ್ಪ ಗಡ್ಡಿ ಬಿ.ಎ. ದ್ವಿತೀಯ ವರ್ಷ ಓದಿದ್ದಾರೆ. ಚಾಲೆಂಜರ್ಸ್ ಪಾರ್ಟಿ ಅಭ್ಯರ್ಥಿ ಬಳ್ಳಾರಿಯ ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ ಬಿ.ಇ. ಸಿವಿಲ್ ಎಂಜಿನಿಯರ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಿರುಪಾದಿ ಕೆ. ಗೋಮರ್ಸಿ ಬಿ.ಎ. ಪದವಿ, ಪಕ್ಷೇತರ ಅಭ್ಯರ್ಥಿ ಕುಷ್ಟಗಿಯ ಇಮಾಮಸಾಬ್ ಜಂಗ್ಲಿಸಾಬ್ ಮುಲ್ಲಾ 8ನೇ ತರಗತಿ ಓದಿದ್ದಾರೆ.