ಕೊಪ್ಪಳ: `ಗವಿಮಠದ ಜಾತ್ರಾ ಮಹೋತ್ಸವ, ಇಲ್ಲಿ ಸೇರಿರುವ ಜನ ಸಾಗರ ಕಂಡು ನನಗೆ ಆನಂದ ಹಾಗೂ ಆಶ್ಚರ್ಯ ಆಗಿದೆ. ಇದು ಸಮಾಜದ ಎಲ್ಲ ಜನರನ್ನೂ ಒಗ್ಗೂಡಿಸುವ ಮಹತ್ಕಾರ್ಯ~
ಬುಧವಾರ ಇಲ್ಲಿ ಗವಿಸಿದ್ಧೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಸುದ್ದಿಗಾರರ ಜೊತೆ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
`ನನ್ನ ಅನುಭವನದಲ್ಲಿ ಇಷ್ಟೊಂದು ಜನ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸೇರಿದ್ದು ನೋಡಿಲ್ಲ. ಹರಿದ್ವಾರದ ಕುಂಭಮೇಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿ ಸಂಭ್ರಮಿಸುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ~ ಎಂದೂ ಹೇಳಿದರು. ಇದೊಂದು ದಕ್ಷಿಣ ಭಾರತದ ಕುಂಭ ಮೇಳ ಎಂಬುದಾಗಿ ನಿಸ್ಸಂಶಯವಾಗಿ ಹೇಳಬಹುದು ಎಂದು ಬಣ್ಣಿಸಿದರು.