ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣಾಧಿಕಾರಿ ಶಿವಾನಂದ್ ಮಾತನಾಡಿ, ‘ತಂಬಾಕು ಸೇವನೆಯ ವಿರುದ್ಧ ಭಾರತ ಮಾತ್ರವಲ್ಲದೇ, ಇಡೀ ವಿಶ್ವವೇ ಹೋರಾಟ ಮಾಡುತ್ತಿವೆ. ಇದರ ಸೇವನೆಯಿಂದ ದುಷ್ಪರಿಣಾಮಗಳು ಹೆಚ್ಚುತ್ತಿದ್ದು, ವೈವಿಧ್ಯಮಯ ಜೀವನ ಶೈಲಿಯಿಂದಾಗಿ ತಂಬಾಕು ಸೇವನೆಗೆ ಪರಿಹಾರ ಕಾಣುತ್ತಿಲ್ಲ. ಜಾಗೃತಿ ಹಾಗೂ ತಿಳಿವಳಿಕೆಯಿಂದ ಮಾತ್ರ ದುಶ್ಚಟಗಳಿಂದ ದೂರವಿಡಲು ಸಾಧ್ಯ’ ಎಂದರು.