ಅಕ್ರಮ ನಿವೇಶನ, ಕಟ್ಟಡಗಳ ವಶಕ್ಕೆ ಮೀನಮೇಷ:
ಪಟ್ಟಣದಲ್ಲಿ ಹಲವೆಡೆ ಪ್ರಭಾವಿಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಆದರೆ, ಅವರನ್ನು ತೆರವು ಮಾಡದೆ ಬಡಜನರು ಹೇಮಾವತಿ ಬಡಾವಣೆಯಲ್ಲಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಪುರಸಭೆಯ ಕ್ರಮ ಕಾನೂನುಬಾಹಿರ. ಪುರಸಭೆ ಕಾರ್ಯಲಯದ ಪಕ್ಕದಲ್ಲಿನ ಜಾಗ ಸೇರಿದಂತೆ ಆರೂವರೆ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇಲ್ಲಿಂದ ಅತಿಕ್ರಮಣಕಾರರನ್ನು ತೆರವುಗೊಳಿಸಲು ಕೋರಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ಮನವಿ ನೀಡಲಾಗಿದೆ. ಆದರೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.