ಶ್ರೀರಂಗಪಟ್ಟಣ: ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಮಳೆಯಿಂದಾಗಿ ಶಕ್ರವಾರ ಮನೆಯೊಂದು ಭಾಗಶಃ ಕುಸಿದಿದೆ. ಗ್ರಾಮದ ದೊಡ್ಡದೇವೇಗೌಡ ಅವರ ಮಗ ಲಿಂಗರಾಜು ಎಂಬವರ ಮನೆ ಅರ್ಧದಷ್ಟು ಕುಸಿದು ಬಿದ್ದಿದೆ. ತೊಲೆಗಳು, ರಿಪೀಸು ಪಟ್ಟಿಗಳು ಮುರಿದಿವೆ. ನೂರಾರು ಹೆಂಚುಗಳು ನಾಶವಾಗಿವೆ. ಪಾತ್ರೆ, ಪಡಗ, ದವಸ– ಧಾನ್ಯ ನಾಶವಾಗಿವೆ. ಮನೆ ಕುಸಿದಾಗ ಒಳಗಿದ್ದ ಲಿಂಗರಾಜು ಅವರ ಪತ್ನಿ ತಕ್ಷಣ ಹೊರಕ್ಕೆ ಓಡಿ ಬಂದು ಅಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೂಕ್ತ ಪರಿಹಾರ ಕೋರಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗುವುದು ಎಂದು ಲಿಂಗರಾಜು ತಿಳಿಸಿದ್ದಾರೆ.