‘ಬಿಜೆಪಿಗೆ ಬರುವಂತೆ ತಮಗೆ ಬಲವಂತವಾಗಿ ಸಿಕಂದರ್, ಹರ್ಷವರ್ಧನ್ ಹಣ ನೀಡಿದ್ದಲ್ಲದೆ ಬೆದರಿಕೆ ಸಹ ಹಾಕಿ ಜಾತಿ ನಿಂದನೆ ಮಾಡಿದರು. ಸಿ.ಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರೂ ಕರೆ ಮಾಡಿ, ಹಣದ ಆಮಿಷ ಒಡ್ಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದರು’ ಎಂದು ಎಂದು ಕಲೈ ಅರಸಿ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ, ಕಲೈ ಅರಸಿ ಮನೆಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ನೇರವಾಗಿ ಹೋಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ.