ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪಕ್ಷಿ ವೀಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿ

Last Updated 13 ಆಗಸ್ಟ್ 2022, 14:46 IST
ಅಕ್ಷರ ಗಾತ್ರ

ಮೈಸೂರು: ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ಪಕ್ಷಿ ವೀಕ್ಷಣೆ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದಿಂದ ಎರಡು ದಿನಗಳವರೆಗೆ ಕಾರಂಜಿ ಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದರ್ಶ ಶಾಲೆಯ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಷ್ಠಾನದ ಡಿ.ರಾಜಕುಮಾರ್‌, ಅನಿಲ್‌ಕುಮಾರ್‌, ಪ್ರದೀಪ್‌ ಮತ್ತು ಮಾರ್ಕ್‌ ಸ್ಟೀವ್‌ ಜಾಗೃತಿ ಮೂಡಿಸಿದರು. ಕೆರೆ, ಜೌಗು ಪ್ರದೇಶದಲ್ಲಿ ಬದುಕುವ ಪಕ್ಷಿಗಳು ಹಾಗೂ ವಲಸೆ ಪಕ್ಷಿಗಳು, ಪಕ್ಷಿಗಳ ಆಹಾರ, ಸಂತಾನೋತ್ಪತ್ತಿ, ಅವುಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳ ಶಬ್ದ, ಹೆಸರು ತಿಳಿಸಿಕೊಟ್ಟರು.

ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಸತೀಶ್‌, ಶಿಕ್ಷಕಿಯರಾದ ದಿವ್ಯ, ಪ್ರಭಾ ಎಂ.ಜಿ., ಲಕ್ಷ್ಮಿ ಆರ್‌., ನಿಶಾಂತ್‌ ಅಂಜುಮ್‌, ಸಾವಿತ್ರಿ ಎಸ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT