ಜಲಾಶಯ ಭರ್ತಿ ಆಗುವುದಕ್ಕೂ ಮುನ್ನವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು, ಕಬಿನಿ ಜಲಾಶಯದ ಎಡ ಮತ್ತು ಬಲ ದಂಡ ನಾಲೆಗೆ ನೀರು ಬಿಡಬೇಕು, ಹುಲ್ಲಹಳ್ಳಿ–ರಾಂಪುರ ನಾಲೆಗೆ ನೀರು ಒದಗಿಸಬೇಕು, ತಾರಕ ಜಲಾಶಯಕ್ಕೆ ಕಬಿನಿ ಹಿನ್ನೀರಿನಿಂದ ನೀರು ತುಂಬಿಸಿ ಆ ಜಲಾಶಯದ ಅಚ್ಚುಕಟ್ಟಿಗೂ ನೀರು ಬಿಡಬೇಕು ಎಂದು ಅವರು ಒತ್ತಾಯಿಸಿದರು.