ಕಳೆದ 10 ವರ್ಷದ ಹಿಂದೆ ಅರ್ಚನಾ ಅವರು ಮಹೇಶ್ ಅವರನ್ನು ವಿವಾಹವಾಗಿದ್ದರು. ಇವರಿಗೆ 9 ವರ್ಷದ ಮಗಳಿದ್ದಾಳೆ. ಸಣ್ಣಪುಟ್ಟ ವಿಚಾರಗಳಿಗೆ ಅರ್ಚನಾ ಹೆಚ್ಚು ಕೋಪಿಸಿಕೊಳ್ಳುತ್ತಿದ್ದರು. ಬುಧವಾರ ಬೆಳಿಗ್ಗೆ ನಂಜನಗೂಡಿಗೆ ಹೊರಟಿದ್ದ ಮಹೇಶ್ ತಿಂಡಿ ಮಾಡದೇ ಇರುವುದಕ್ಕೆ ಪತ್ನಿ ಮೇಲೆ ಕೋಪಿಸಿಕೊಂಡಿದ್ದಾರೆ. ನಂತರ, ಇವರು ರಾತ್ರಿ ಬಂದಾಗಲೂ ಇಬ್ಬರ ಮಧ್ಯೆ ಮಾತುಕತೆ ನಡೆದಿಲ್ಲ. ಆದರೆ, ತಡರಾತ್ರಿ ಮನೆಯಲ್ಲಿ ಅರ್ಚನಾ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.