ಜಾಲಹಳ್ಳಿಯ ವೀರಭದ್ರಯ್ಯ ಸ್ವಾಮಿ ಎಂಬುವರಿಗೆ ₹4,57,819, ಬಸವರಾಜ ಎಂಬುವವರಿಗೆ ₹ 6,93,391ರೂ ಮತ್ತು ಅವರ ಕುಟುಂಬ ಸದಸ್ಯರಿಗೂ ಬೆಳೆವಿಮೆ ಹಣ ಜಮೆಯಾಗಿದೆ. ನೀಲಮ್ಮ ಎಂಬುವವರಿಗೆ ₹2,71,851, ರಾಚಯ್ಯ ₹ 1,90,426 ಹೀಗೆ ದಯಾನಂದ, ಬಸವರಾಜ ಸೇರಿದಂತೆ ಅನೇಕರಿಗೆ ಬೆಳೆವಿಮೆ ಹಣ ಜಮೆಯಾಗಿದೆ. ಇಷ್ಟು ಹಣ ನಾಲ್ಕೈದು ವ್ಯಕ್ತಿಗಳಿಗೆ ಮಾತ್ರ ಜಮೆಯಾಗಿರುವುದು ಹೇಗೆ? ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.