‘ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದ ಸಾಮಾನ್ಯ, ದುಡಿಯುವ ವರ್ಗ, ರೈತರ ಪರಿಸ್ಥಿತಿ ಗಂಭೀರವಾಗಿದೆ. ಬಡವರ ದುಡಿಮೆ ಪರೋಕ್ಷವಾಗಿ ಜಿಎಸ್ಟಿ ಮೂಲಕ ಕೆಲವೇ ಕೆಲವು ಶ್ರೀಮಂತರ ಜೇಬು ತಲುಪುತ್ತಿದೆ. ಬಡವ–ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ರೈತರ ಸಾಲಮನ್ನಾ ಮಾಡದೇ ಉದ್ಯಮಿಗಳ ಸಾಲಮನ್ನಾ ಮಾಡಲಾಗಿದೆ’ ಎಂದು ತಿಳಿಸಿದರು.