ರಾಯಚೂರು: ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಬುಧವಾರ ಶರಣಪ್ ಅವರ ಭತ್ತದ ಬಣವೆಗೆ ಬೆಂಕಿ ಹೊತ್ತಿಕೊಂಡು ಅಂದಾಜು ₹40 ಸಾವಿರ ಬೆಲೆಯ ಹುಲ್ಲು ಭಸ್ಮವಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಆವರಿಸಿದ್ದು ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾಗಿದ್ದು ಚಿಂತೆಗೀಡುವಂತಾಗಿದೆ ಎಂದು ರೈತ ಶರಣಪ್ಪ ಅಳಲು ತೋಡಿಕೊಂಡಿದ್ದಾರೆ.