ಬೃಹತ್ ಕಲ್ಲಿನ ಶಿಲೆಗಳಿಂದ ನಿರ್ಮಾಣವಾದ ದೇವಾಲಯದಲ್ಲಿ ಶಿವನಮೂರ್ತಿ ಪ್ರತಿಷ್ಠಾಪಿಸಲಾಗಿದೆ, ಗತಕಾಲದಿಂದ ಪ್ರತಿವರ್ಷ ಶಿವರಾತ್ರಿಗೆ ಜಾತ್ರೆ ನಡೆಯುವ ಸಂಪ್ರದಾಯ ಮುಂದುವರೆದಿದೆ.
ದೇವಸ್ಥಾನದ ಇತಿಹಾಸ ಸಾರುವ ಶಿಲಾಶಾಸನ ದೇವಾಲಯದ ಆವರಣದಲ್ಲಿದೆ, ಇದು ಕಲ್ಯಾಣ ಕಾಲುಕ್ಯರ ಪ್ರಸಿದ್ದ ಅರಸ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಮೂಡಿಬಂದಿದೆ. ಶನಿವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಾಳೆಗೊನಿ, ಮಾವಿನಎಲೆ, ತೆಂಗಿನಗರಿ, ಹೂವುಗಳಿಂದ ಅಲಂಕಾರ ಮಾಡಲಾಯಿತು, ನಂತರ ಶಿವನ ಮೂರ್ತಿಗೆ ವಿಶೇಷ ಪೂಜೆ ನಡೆಯಿತು, ಭಕ್ತರು ದೇವರಿಗೆ ನೈವೇಧ್ಯ ಅರ್ಪಿಸಿದರು.
ಸಾಯಂಕಾಲ ಕಲ್ಲೇಶ್ವರ ದೇವರ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಉಚ್ಚಾಯವನ್ನು ಭಕ್ತರು ಸಂಭ್ರಮದಿಂದ ಎಳೆದರು. ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಇದ್ದರು.