ಮಸ್ಕಿ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ವಿಭಿನ್ನವಾಗಿ ಮಾಡುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ರಸ್ತೆ ಪಕ್ಕದ ಹೋಟೆಲ್ನಲ್ಲಿ ಬಜ್ಜಿ ಕರಿದು ಮತಯಾಚನೆ ಮಾಡಿದರು.
ಮೊದಲು ತಾವೊಬ್ಬರೇ ಮಸಾಲೆ ಚುರುಮುರಿ ಖರೀದಿಸಿ ಹಣ ನೀಡಿದರು. ಆ ನಂತರ ಕಾರ್ಯಕರ್ತರಿಗಾಗಿ ಹೋಟೆಲ್ನಲ್ಲಿದ್ದ ಎಲ್ಲ ಚುರುಮುರಿ, ಸೇವು ಖರೀದಿಸಿಕೊಟ್ಟರು.
ಬಜ್ಜಿ ಕರಿಯುವುದನ್ನು ಗಮನಿಸಿ, ಕೈಯಲ್ಲಿದ್ದ ಜಾರಿ ಪಡೆದುಕೊಂಡು, ತಾವೇ ಬಜ್ಜಿ ಕರಿದು ಬೆಂಬಲಿಗರಿಗೆ ತಿನ್ನಲು ನೀಡಿದರು.