ಕದ್ದ ಚಿನ್ನದಲ್ಲಿನ ಒಂದು ಬ್ರೆಸ್ಲೆಟ್ ಅನ್ನು ಪ್ರಿಯಕರನಿಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಮಾಲೀಕರು ಎಲ್ಲ ಚಿನ್ನ ವಾಪಸ್ ಕೊಡುವಂತೆ ಗಡುವು ನೀಡಿದ್ದರು. ಮೆಹಮುನಾ ಪ್ರಿಯಕನಿಗೆ ಕೊಟ್ಟ ಬ್ರೆಸ್ಲೆಟ್ ಮರಳಿ ಕೊಡುವಂತೆ ಕೇಳಿದ್ದಳು. ಆದರೆ, ಆತ ಬ್ರೆಸ್ಲೆಟ್ ವಾಪಾಸ್ ಕೊಡದೇ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಮೆಹಮುನಾ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಮಗಳು ಮಾಡಿದ ತಪ್ಪಿನಿಂದಾಗಿ ನೊಂದಿದ್ದ ತಂದೆ ಸಮೀರ್ ಅಹದ್, ತಾಯಿ ಜುಲೇಖಾ ಬೇಗಂ ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಯ ಮೇಲೆ ಬಿದ್ದಿದ್ದರು. ಈ ಘಟನೆಯಲ್ಲಿ ಮೆಹಮುನಾ ಗಂಭೀರ ಗಾಯಗೊಂಡಿದ್ದಾಳೆ. ರಾಯಚೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.