ಮಸ್ಕಿ: ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಏ.5 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಘನಮಠದಯ್ಯ ಸಾಲಿಮಠ, ಕರಿಬಸ್ಸಯ್ಯ ಸ್ವಾಮಿ ತಿಳಿಸಿದರು.
ಜಯಂತಿ ಆಚರಣೆ ನಿಮಿತ್ತ ಪಟ್ಟಣದ ಗಚ್ಚಿನಮಠದಲ್ಲಿ ಸೋಮವಾರ ಕರೆಯಲಾಗಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 5 ರಂದು ಬೆಳಿಗ್ಗೆ 8 ಗಂಟೆಗೆ ರೇಣುಕಾಚಾರ್ಯರರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6 ಕ್ಕೆ ಗಚ್ಚಿನಮಠದ ಆವರಣದಲ್ಲಿ ಧರ್ಮ ಸಭೆ ನಡೆಯಲಿದ್ದು ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ನಂದವಾಡಗಿಯ ಡಾ.ಅಭಿನವ ಚನ್ನಬಸವ ಸ್ವಾಮೀಜಿ, ವಳಬಳ್ಳಾರಿಯ ಬಸವಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಮಹಾಂತಸ್ವಾಮೀಜಿ ಹಾಗೂ ಬಳಗಾನೂರಿನ ಸಿದ್ಧ ಬಸವ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿದ್ಧಲಿಂಗಯ್ಯ ಗಚ್ಚಿನಮಠ, ಡಾ. ಪಂಚಾಕ್ಷರಯ್ಯ ಕಂಬಾಳಿಮಠ, ಆದಯ್ಯ ಸ್ವಾಮಿ ಕ್ಯಾತನಟ್ಟಿ, ಸುರೇಶ ಹರಸೂರು, ಈಶಪ್ಪ ಗಂಗಾವತಿ, ಶಿವಕುಮಾರ ಎನ್, ಮಹಾಂತೇಶ ಮಸ್ಕಿ, ಮಲ್ಲಿಕಾರ್ಜುನ ಕಂದಗಲ್, ಅಮರೇಶ ಬ್ಯಾಳಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.