‘2018ರಲ್ಲಿ ಫಾರಂ ನಂ.57ರ ಅಡಿಯಲ್ಲಿ ಸಲ್ಲಿಸಿದ 80 ರಿಂದ 90 ರಷ್ಟು ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸಲಾಗಿದೆ. ಹೀಗಾಗಿ ಮಸ್ಕಿ, ಸಿಂಧನೂರು, ರಾಯಚೂರು, ಮಾನ್ವಿ, ಸಿರವಾರ, ಲಿಂಗಸುಗೂರು, ದೇವದುರ್ಗದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿತ್ತು. ಆಗ ಜಿಲ್ಲಾಧಿಕಾರಿ ಚಂದ್ರಶೇಖರ ಎಲ್.ನಾಯಕ ಅವರು ಭೂ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಗೆ ಆರು ತಿಂಗಳಾದರೂ ಸಭೆ ಕರೆದಿಲ್ಲ. ಇದರಿಂದ ಇವರು ಬಡ ರೈತರ ಪರನೋ ಅಥವಾ ಶ್ರೀಮಂತರ ಪರವನೋ ಎಂಬುದು ತಿಳಿಯದಂತಾಗಿದೆ.