‘ಬಡವ ಬಂಧು ಡಾ. ಮಂಜುನಾಥ್’ ಎಂಬ ಹೆಸರಿನಲ್ಲಿ ಅವರ ಫೋಟೊದೊಂದಿಗೆ ಫೇಸ್ಬುಕ್ ಖಾತೆಯಲ್ಲಿ ತೆರೆದಿರುವ ದುಷ್ಕರ್ಮಿಗಳು, ಸಹೋದರರ ಕುರಿತು ಅವಹೇಳನಕಾರಿ ಸಂದೇಶದೊಂದಿಗೆ ಪೋಸ್ಟ್ ಮಾಡಿದ್ದಾರೆ. ಸಹೋದರರು ರೌಡಿಗಳು, ಕೊತ್ವಾಲ್ ಶಿಷ್ಯರು ಎಂದಲ್ಲಾ ಬರೆದಿರುವ ದುಷ್ಕರ್ಮಿಗಳು ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯಾರದ್ದೊ ಗಾಯಾಳುಗಳ ಚಿತ್ರ ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತದಾರರಲ್ಲಿ ಭಯ ಉಂಟುಮಾಡುತ್ತಿದ್ದಾರೆ ಎಂದೆಲ್ಲಾ ಪೋಸ್ಟ್ನಲ್ಲಿ ನಮೂದಿಸಲಾಗಿದೆ.