ಮಾಗಡಿ: ತಾಲ್ಲೂಕಿನ ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಸಿಂಗನಹಳ್ಳಿ ಸೋಮನಕಟ್ಟೆ ಕೆರೆ ಕೋಡಿ ಹರಿದು ಹೊಂಗೆಕಾವಲ್ ಏರಿ ಮಧ್ಯೆ ದೊಡ್ಡ ಬಿರುಕು ಉಂಟಾಗಿ ಅಪಾರ ನೀರು ವ್ಯರ್ಥವಾಗುತ್ತಿದೆ.
ಕೂಡಲೇ ಏರಿ ಸರಿಪಡಿಸುವಂತೆ ಹಾಲಸಿಂಗನಹಳ್ಳಿ, ಹೂಜಗಲ್ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸುಮಾರು 40ಎಕರೆ ವಿಸ್ತೀರ್ಣ ಹೊಂದಿರುವ ಸೋಮನಕಟ್ಟೆ ಕೆರೆಯು ವಾರದಿಂದ ಸುರಿಯುತ್ತಿರುವ ಮಳೆಗೆ ಕೋಡಿ ಹರಿದಿದೆ.
ಸ್ಥಳಕ್ಕೆ ಸಣ್ಣ ನೀರಾವರಿ ಅಧಿಕಾರಿಗಳ ಭೇಟಿ: ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಕೊಟ್ರೇಶ್ ಸ್ಥಳಕ್ಕೆ ಭೇಟಿ ನೀಡಿ, ನೀರು ವ್ಯರ್ಥವಾಗದಂತೆ ಕ್ರಮ ವಹಿಸಲಾಗುವುದು ಎಂದರು.