ಹಿನ್ನೆಲೆ: ಇದೇ 4ರಂದು ಪ್ರಜ್ವಲ್ ಹಾರೋಹಳ್ಳಿಯ ತೋಟದ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು. ಶವಸಂಸ್ಕಾರ ವೇಳೆ ಆತನ ಕಿವಿ, ಎದೆಯಭಾಗ, ಬಲಗೈ ತೋಳು, ಎರಡು ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿರುವುದನ್ನು ಕುಟುಂಬದವರು ಗಮನಿಸಿದ್ದರು. ಮೃತ ದೇಹದ ಮೇಲಿನ ಗಾಯಗಳ ಬಗ್ಗೆ ಕೇಳಿದಾಗ ಪ್ರಜ್ವಲ್ ನ ತಾಯಿ ವರಲಕ್ಷ್ಮಿ ಏನನ್ನೂ ಹೇಳದೆ ಮೌನವಾಗಿದ್ದರು. ಆತನ ಸಾವಿನ ಬಗ್ಗೆ ಕೆಲವರು ತದ್ವಿರುದ್ಧ ವಿಚಾರಗಳನ್ನು ಹೇಳಿದರು. ಆದರೂ ಕುಟುಂಬದವರು ಪ್ರಜ್ವಲ್ ನ ಕಳೆಬರವನ್ನು ಜಾಲಮಂಗಲಕ್ಕೆ ತಂದು ಮಾವಿನ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.