ರಾಜ್ಯದಲ್ಲಿ ಲಕ್ಷಾಂತರ ಅಡಿಕೆ ಬೆಳೆಗಾರರಿದ್ದಾರೆ. ಅಡಿಕೆ ಉದ್ಯಮ ಬಹುದೊಡ್ಡದಾಗಿದೆ. ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸ್ಥಿತಿಯಲ್ಲಿದೆ. ಈ ಉದ್ಯಮಕ್ಕೆ ಸಂಬಂಧಿಸಿದಂತೆ ಕೇವಲ ಬೆಳೆಗಾರರು ಮಾತ್ರವಲ್ಲದೇ ಕಾರ್ಮಿಕರು, ಮಂಡಿ ಕಾರ್ಮಿಕರು, ಹಮಾಲರು, ಕೈಗಾಡಿಯವರು, ಲಾರಿ ಮತ್ತು ಉದ್ಯಮ ಕ್ಷೇತ್ರ ಎಲ್ಲವೂ ಅವಲಂಬಿತವಾಗಿವೆ. ನಿಷೇಧದಿಂದ ಇವರೆಲ್ಲರ ಬದುಕು ಬೀದಿಗೆ ಬೀಳಲಿದೆ ಎಂದು ಆರೋಪಿಸಿದರು.