ಈ ಉತ್ಸವ ಆಧ್ಯಾತ್ಮ ಚಿಂತನೆಯ ಪ್ರತಿರೂಪ. ಹೆಚ್ಚಿನ ಜನರು ಭಾಗವಹಿಸಿ, ಇಲ್ಲಿ ಬಿತ್ತರವಾಗುವ ಮೌಲ್ಯಗಳನ್ನು ಅರಿಯಬೇಕು. ಅಕ್ಕಮಹಾದೇವಿ ಹುಟ್ಟಿದ ಈ ಜಿಲ್ಲೆಯಲ್ಲಿ ಮಹಿಳೆಯರು ಅಧ್ಯಾತ್ಮ ಪ್ರವಚನ, ಕೃಷಿ , ಶಿಕ್ಷಣ, ಉದ್ಯೋಗ , ಆರೋಗ್ಯ ಗೊಷ್ಠಿಗಳಿಗೆ ಹಾಜರಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬೇಕು ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಶ್ರೀ, ಬಸವಕೇಂದ್ರ ಬಸವಮರುಳ ಸಿದ್ದಸ್ವಾಮೀಜಿ ಸಾನಿಧ್ಯ ವಹಿಸಿದ್ದರು.