ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಲ್ಲೂರು ಹಾಗೂ ಬೆನಕನಗೊಂದಿ ಗ್ರಾಮದ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದಿಂದ ಅಗ್ನಿ ಬನ್ನಿರಾಯ ಜಯಂತಿಯನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ರಾಜ ಬೀದಿಗಳಲ್ಲಿ ಅಗ್ನಿಬನ್ನಿರಾಯ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗಿದ ದಾರಿ ಉದ್ಧಕ್ಕೂ ಪಾನಕ, ಫಲಹಾರ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.
ಆಣೆಕಾರ್ ಯಜಮಾನ್ ಕೃಷ್ಣಪ್ಪ ಮಾತನಾಡಿ, ತಿಗಳ ಸಮುದಾಯದವರು ಯಾರಿಗೂ ಕೆಡಕು ಬಯಸದೆ ಸನ್ಮಾರ್ಗದಲ್ಲಿ ಸಾಗುತ್ತಾ, ಶ್ರಮ ಜೀವನದ ಬದುಕು ಕಟ್ಟಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕುಲದ ಗೌಡರಾದ ಕೆ.ಪಿ. ರಾಜೇಗೌಡರು ಮಾತನಾಡಿ, ಸಮುದಾಯದವರು ಹಣ್ಣು, ತರಕಾರಿ ಬೆಳೆದು ಬದುಕು ಕಟ್ಟಿಕೊಳ್ಳುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಮುದ್ರೆ ಲಕ್ಷ್ಮಣಪ್ಪ, ಬೆನಕನಗೊಂದಿ ಗೌಡರು, ಸಮುದಾಯದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.