ಪ್ರಕರಣ ಹಿನ್ನೆಲೆ: ಡಿ.ರಾಧಾ ಅವರನ್ನು ಅದೇ ಗ್ರಾಮದ ನಾಗರಾಜು ಅವರೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮೂರು ವರ್ಷದ ಗಂಡು ಮಗನಿದ್ದ. ಮಾರನಹಟ್ಟಿಯಲ್ಲೇ ನಾವು ಕಟ್ಟಿಸಿಕೊಟ್ಟ (ತವರು ಮನೆಯರು) ಮನೆಯಲ್ಲಿ ದಂಪತಿ ವಾಸವಿದ್ದರು. ರಾಧಾಳಿಗೆ ಗಂಡ, ಅತ್ತೆ, ಮಾವ, ಭಾವ, ಮೈದುನ ಸೇರಿ ಮನೆಯವರೆಲ್ಲ ಏ.22ರಂದು ಕಿರುಕುಳ ನೀಡಿದ್ದರು. ಕಿರುಕುಳ ತಾಳದೇ ತಮ್ಮ ತಂಗಿ ಮಗನಿಗೆ ವಿಷ ಉಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಧಾಳ ಸಹೋದರ ಬಸವರಾಜು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.