ಮಧುಗಿರಿ: ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಾರದು ಎಂದು ಸರ್ಕಾರ ಮೇವು ಬ್ಯಾಂಕ್ ಪ್ರಾರಂಭಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ ಹೇಳಿದರು.
ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಮೇವು ಬ್ಯಾಂಕ್ಗೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಈಗಾಗಲೇ 30 ಸಾವಿರ ಮೇವಿನ ಕಿರು ಪೊಟ್ಟಣಗಳನ್ನು ರೈತರಿಗೆ ವಿತರಿಸಲಾಗಿದೆ. ರೈತರು ಮೇವು ಬೆಳೆದು ನಿರ್ವಹಣೆ ಮಾಡಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಲಿಲ್ಲ. ಬ್ಯಾಂಕ್ಗೆ ನಿತ್ಯ 24 ಟನ್ ಮೇವು ಸರಬರಾಜು ಮಾಡಬೇಕು ಮತ್ತು ಅದನ್ನು ರೈತರಿಗೆ ವಿತರಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಸಿಗ್ಮತ್ ಉಲ್ಲಾ, ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ಧನಗೌಡ, ಕಂದಾಯ ನಿರೀಕ್ಷಕ ವೇಣುಗೋಪಾಲ್, ಚಿಕ್ಕರಾಜು, ಗ್ರಾಮ ಲೆಕ್ಕಿಗ ವಸಂತಕುಮಾರ್, ಪಿಡಿಒ ದಿವಾಕರ್, ಕಂದಾಯ ಇಲಾಖೆಯ ಸುನೀಲ್ ಹಾಜರಿದ್ದರು.