ಶುಕ್ರವಾರ ರಾತ್ರಿ ಉರುಳಿಗೆ ಸಿಕ್ಕಿದ್ದ ಇದು ಶನಿವಾರ ಮಧ್ಯಾಹ್ನದವರೆಗೂ ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು. ಹಾಸನದಿಂದ ಅರವಳಿಕೆ ತಜ್ಞರನ್ನು ಕರೆಸಿ ಚಿರತೆ ರಕ್ಷಿಸುವ ಪ್ರಯತ್ನ ನಡೆದರೂ ಅದು ಫಲ ನೀಡಲಿಲ್ಲ. ವಲಯ ಅರಣ್ಯಾಧಿಕಾರಿ ರಾಕೇಶ್ ನೇತೃತ್ವದಲ್ಲಿ ವೈದ್ಯರ ಸಮಕ್ಷಮ ತಾಲ್ಲೂಕಿನ ಚೌಡ್ಲಾಪುರ ಅರಣ್ಯ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯನ್ನು ದಹನ ಮಾಡಲಾಯಿತು. ತೋಟದ ಮಾಲೀಕ ನೆನ್ನೆಯಿಂದ ನಾಪತ್ತೆ ಆಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.