ದೇವೇಗೌಡರು ಜಾತಿವಾದಿ ಅಲ್ಲ, ಕುಟುಂಬವಾದಿ. ಜೆಡಿಎಸ್ ಪಕ್ಷವು ಗೌಡರ ಅಳಿಯ, ಮಗ, ಮೊಮ್ಮಗ... ಹೀಗೆ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಕುಟುಂಬದ ಸದಸ್ಯರನ್ನು ಬಿಟ್ಟರೆ ಯಾವ ಒಕ್ಕಲಿಗರನ್ನೂ ದೇವೇಗೌಡರು ಬೆಳೆಸಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಅವರೇ ಚುನಾವಣೆಗೆ ನಿಂತರು. ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ? ಎಂದು ಪ್ರಶ್ನಿಸಿದರು.