ತಿಪಟೂರು: ತಾಲ್ಲೂಕಿಗೆ ಮೊದಲ ಮಳೆಯ ಸಿಂಚನವಾಗಿದ್ದು, ಬಿಸಿಲಿನ ಬೇಗೆಗೆ ಬಸವಳಿದು ಹೋಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಪೂರ್ವ ಮುಂಗಾರು ಮಳೆಯಾಗಿದ್ದು ತಾಲ್ಲೂಕಿನಾದ್ಯಂತ ರೈತರು ಸಂತಸಗೊಂಡಿದ್ದಾರೆ. ಹಿಂದಿನಿಂದಲೂ ‘ಭರಣಿ ಮಳೆಯಾದರೆ ಧರಣಿಯೆಲ್ಲಾ ಬೆಳೆ’ ಎಂಬ ನಾನ್ನುಡಿಯಿದೆ. ಪೂರ್ವ ಮುಂಗಾರು ಮಳೆ ಕೃಷಿ ಚಟುವಟಿಕೆಗೆ ತೊಡಗಲು ರೈತರಿಗೆ ಭರವಸೆ ಮೂಡಿಸಿದೆ.
ತಿಪಟೂರು ತಾಲ್ಲೂಕಿನಲ್ಲಿ ಮಳೆಯಾಗಿರುವುದು
ಆಲಿಕಲ್ಲು ಮಳೆ: ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ನೆಲಗೊಮಡನಹಳ್ಳಿ, ವಿರುಪಾಕ್ಷಿಪುರ, ಪಟ್ರೇಹಳ್ಳಿ, ಮತ್ತೀಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ತಿಪಟೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ