ಬಾಲಕಿಯನ್ನು ಪರಿಚಯ ಮಾಡಿಕೊಂಡ ಸೈಯದ್, ಆಕೆಯನ್ನು 2017ರ ಮೇ 6ರಂದು ರಾಜಸ್ಥಾನದ ಅಜ್ಮೀರ್ಗೆ ಕರೆದುಕೊಂಡು ಹೋಗಿದ್ದರು. ಮೇ 26ರ ವರೆಗೆ ಬಾಲಕಿಯನ್ನು ಅಕ್ರಮವಾಗಿ ಇರಿಸಿಕೊಂಡಿದ್ದರು. ಬಲವಂತವಾಗಿ ದೌರ್ಜನ್ಯವೆಸಗಿದ್ದರು. ಈ ಕುರಿತು ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಎಂ.ದೀಪಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.