ಉಡುಪಿ: ಕಾರ್ಕಳ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಬರುವ ಎಲ್ಲಾ ಬಸ್ಗಳ ಪರವಾನಗಿ ಹಾಗೂ ವೇಳಾಪಟ್ಟಿ ಪ್ರತಿಗಳನ್ನು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾರ್ಕಳ ನಗರಕ್ಕೆ ವಿವಿಧ ಪ್ರಾಧಿಕಾರದಿಂದ ನೀಡಿದ ಮೂಲ ಪರವಾನಗಿ ಹಾಗೂ ವೇಳಾಪಟ್ಟಿಯ 1 ಛಾಯಾಪ್ರತಿ ಜತೆ ಮಣಿಪಾಲದಲ್ಲಿನ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಇದೇ 20ರಂದು ಬೆಳಿಗ್ಗೆ 11ಗಂಟೆಗೆ ತಪ್ಪದೆ ಹಾಜರುಪಡಿಸುವಂತೆ ಪ್ರದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.