ಬನವಾಸಿ ಹೋಬಳಿಯಲ್ಲಿ ಬೆಳಗಿನಿಂದ ಪ್ರಚಾರ ಆರಂಭಿಸಿದ ಸೊರಕೆ, ಸಹಸ್ರಳ್ಳಿ, ಮೊಗವಳ್ಳಿ, ಕಲಕೊಪ್ಪ, ನರೂರು, ಎಡಗೊಪ್ಪ, ಬನವಾಸಿಯಲ್ಲಿ ಗ್ರಾಮಸ್ಥರ ಜೊತೆ ಚರ್ಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು. ಕಾಂಗ್ರೆಸ್ ಮುಖಂಡ ಪಿ.ಸಿ.ಮೋಹನ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ಪ್ರಮುಖರಾದ ಎಸ್.ಟಿ.ಹೆಗಡೆ, ಕಿರಣ ನಾಯ್ಕ ಇದ್ದರು.