’ಹಲವಾರು ವರ್ಷಗಳಿಂದ ಇದ್ದ ಚರಂಡಿಗೆ ಕಟ್ಟೆ ಕಟ್ಟಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ, ರಸ್ತೆ ಮೇಲೆ ನಿಲ್ಲುವ ಜತೆಗೆ, ಮನೆಗಳಿಗೆ ನುಗ್ಗುತ್ತಿತ್ತು. ಈ ಸಂಬಂಧ ಸ್ಥಳೀಯರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಗತಿನಗರದಲ್ಲಿ ಮಂಜೂರಾದ ₹ 9 ಕೋಟಿ ವೆಚ್ಚದ ಚರಂಡಿ ಕಾಮಗಾರಿ ಮುಗಿಯುವವರೆಗೆ ಈ ಮೊದಲು ನೀರು ಹರಿಯುತ್ತಿದ್ದ ಕಾಲುವೆಯಲ್ಲೇ ನೀರು ಹರಿಯಲು ಅವಕಾಶ ಮಾಡಿ ಕೊಡಬೇಕು. ಚರಂಡಿಗೆ ಕಟ್ಟಿದ ತಡೆಗೋಡೆ ಒಡೆಯಬೇಕು ಎಂದು ಆದೇಶಿಸಿದೆ. ಈ ಕಾರಣ 50ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ತಡೆಗೋಡೆ ತೆರವುಗೊಳಿಸಲಾಯಿತು.