‘ಮೊದಲಿಂದಲೂ ದಲಿತರು ಬಿ.ಜೆ.ಪಿ.ಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತಿತ್ತು. ಅಲ್ಲದೇ ಬಿ.ಜೆ.ಪಿ.ಯು ದಲಿತ ವಿರೋಧಿ ಎಂಬ ಹಣೆಪಟ್ಟಿಯನ್ನು ಬೇರೆಯವರು ಕಟ್ಟಿದ್ದರು. ಆದರೆ, ನಿಜವಾದ ಪರಿಸ್ಥಿತಿ ಆ ರೀತಿಯಿಲ್ಲ. ಕಾಂಗ್ರೆಸ್ನವರು ದಲಿತ ಮುಖ್ಯಮಂತ್ರಿ ವಿಚಾರವನ್ನು ಹಿಮ್ಮೆಟ್ಟಿದರು. ಸಮಾವೇಶವೊಂದರಲ್ಲಿ ಡಾ.ಜಿ.ಪರಮೇಶ್ವರ ಕಣ್ಣೀರು ಹಾಕಿದ್ದಕ್ಕೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಾಂಗ್ರೆಸ್ನವರು ಕೇವಲ ಬಾಯಿ ಮಾತಲ್ಲಿ ಸಾಮಾಜಿಕ ನ್ಯಾಯ ಅಂತಾರೆ. ಆದರೆ, ನಾವು ಮಾಡಿ ತೋರಿಸಿದ್ದೇವೆ. ಯಾವುದೇ ಬೇಡಿಕೆ ಇಲ್ಲದಿದ್ದರೂ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಇದಕ್ಕೆ ಉದಾಹರಣೆ’ ಎಂದು ಹೇಳಿದರು.