ಗೋಪಾಲಗೌರವ ಕಾರ್ಯಕ್ರಮದಲ್ಲಿ ಸಹಯೋಗ ನೀಡಿದ ಮುಂಬೈನ ದಿನೇಶ ಶಹರಾ ಫೌಂಡೇಷನ್ ಸಂಸ್ಥಾಪಕ ಉದ್ಯಮಿ ದಿನೇಶ ಶಹರಾ ಮಾತನಾಡಿ, ‘ನಮ್ಮದು ಸನಾತನ ಧರ್ಮ. ನಾವು ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಹೊಂದಿದವರು. ಹೀಗಾಗಿಯೇ ನಮ್ಮ ಫೌಂಡೇಶನ್ ಮೂಲಕ ಅಂಗವಿಕರಿಗೆ, ಜನಸಾಮಾನ್ಯರಿಗೆ, ಗೋವುಗಳಿಗೆ, ಆರೋಗ್ಯ ತಪಾಸಣೆ, ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಲು ಮುಂದಾಗಿದ್ದೇವೆ’ ಎಂದು ಹೇಳಿದರು.