‘ಅತ್ಯಾಧುನಿಕ ಜಿಪಿಎಸ್, ಸೆನ್ಸಾರ್ ಒಳಗೊಂಡಂತೆ ಸುಧಾರಿತ ಸೌಲಭ್ಯವುಳ್ಳ ರೈಡರ್ ಬೋಯ್ನ್ನು ಕಾರವಾರ ಸೇರಿ ದೇಶದ 6 ಕಡೆ ಮಾತ್ರ ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಅಳವಡಿಸಿದೆ. ಸಮುದ್ರದಲ್ಲಿ ಉಂಟಾಗುವ ಪ್ರತಿ ಕ್ಷಣದ ಬದಲಾವಣೆಯ ಮಾಹಿತಿ ನಿಖರವಾಗಿ ಪಡೆಯಬಹುದು. ರಾಜ್ಯದ ಪಶ್ಚಿಮ ಕರಾವಳಿ ಭಾಗದ ಮೀನುಗಾರರಿಗೆ ಚಂಡಮಾರುತ, ಸಮುದ್ರ ಪ್ರಕ್ಷುಬ್ಧತೆ ಮಾಹಿತಿ ನೀಡಬಹುದು. ಅದು ಕಳ್ಳತನವಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೆ.ಎಲ್.ರಾಠೋಡ್ ತಿಳಿಸಿದರು.