ವಿಷಯ ತಿಳಿದು ಬಾವಿ ಇರುವ ಸ್ಥಳಕ್ಕೆ ಬಂದ ಸಂಸದ ಅನಂತಕುಮಾರ ಹೆಗಡೆ ಅವರು, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಜತೆ ದೂರವಾಣಿಯಲ್ಲಿ ಮಾತನಾಡಿ, ‘ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಗೌರಿ ನಾಯ್ಕ ಸ್ವತಃ ಬಾವಿ ತೋಡಲು ಅವಕಾಶ ನೀಡಿ, ಸದ್ಯ ಬಂದ್ ಇರುವ ಬಾವಿಯ ಬಾಗಿಲು ತೆರೆಯಲು ಸೂಚಿಸುವೆ’ ಎಂದರು.