ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಹೆಬ್ಬಾರ್ 'ಗೃಹ ಪ್ರವೇಶ'ಕ್ಕೆ ಕಾದಿದ್ದೇವೆ: ಸಚಿವ ಮಂಕಾಳ ವೈದ್ಯ

Published 30 ಆಗಸ್ಟ್ 2023, 9:06 IST
Last Updated 30 ಆಗಸ್ಟ್ 2023, 9:06 IST
ಅಕ್ಷರ ಗಾತ್ರ

ಕಾರವಾರ: 'ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಮನೆಯ ಸದಸ್ಯರಾಗಿದ್ದವರು. ಅವರು ಮನೆಗೆ ಪುನಃ ಮರಳುವುದಕ್ಕೆ ಕಾಯುತ್ತಿದ್ದೇವೆ' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ಯಾವುದೇ ಹುದ್ದೆ, ಅಧಿಕಾರ ಬಯಸಿ ಪಕ್ಷಕ್ಕೆ ಬರಬೇಡಿ. ಬಿಜೆಪಿಯಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವುದಾದರೆ ಬನ್ನಿ ಎಂದು ಶಿವರಾಮ ಹೆಬ್ಬಾರ್ ಅವರಿಗೆ ಹೇಳಿದ್ದೇನೆ' ಎಂದರು.

'ಯಾವಾಗ ಪಕ್ಷ ಸೇರುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಅವರು ಕಾಂಗ್ರೆಸ್ ಗೃಹ ಪ್ರವೇಶಿಸುವುದಕ್ಕೆ ಕಾತರರಾಗಿದ್ದೇವೆ. ಮುಹೂರ್ತ ಯಾವಾಗ ಎಂಬುದನ್ನು ಅವರೇ ನಿರ್ಧರಿಸುತ್ತಾರೆ' ಎಂದು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT