ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕಾಳಿ ಸೇತುವೆ ಬಳಿ ಹೆದ್ದಾರಿ ಸ್ವಲ್ಪ ಎತ್ತರವಾಗಿದೆ. ಇದರಿಂದ ಹೆದ್ದಾರಿಯನ್ನು ಸಂಪರ್ಕಿಸುವ ಕೋಡಿಬಾಗದ ರಸ್ತೆ ತುಂಬಾ ಇಳಿಜಾರು ಆಗಿದೆ. ಹೀಗಾಗಿ ಹೆದ್ದಾರಿಗೆ ತೆರಳುವಾಗ ವಾಹನ ಸವಾರರು ಮೈಯೆಲ್ಲಾ ಕಣ್ಣಾಗಿರಬೇಕು. ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪೆನಿಯು ರಸ್ತೆಯ ಇಕ್ಕೆಲಗಳಲ್ಲಿ ಅಗತ್ಯ ಪ್ರತಿಫಲನ ಫಲಕಗಳನ್ನು ಹಾಕಿದೆ. ಆದರೂ ಹಲವು ಬಾರಿ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ಹಿಂದೆ ಸರಿದ ನಿದರ್ಶನಗಳಿವೆ.