ಕಾಳಮ್ಮ ನಗರವು ಅತ್ಯಂತ ದೊಡ್ಡ ಪ್ರದೇಶವಾಗಿದೆ. ಕಳೆದ ಬಾರಿಯೂ ಇದೇ ರೀತಿ ಘಟನೆಯಾಗಿದ್ದು, ಅನೇಕರು ಹೋರಾಟ ನಡೆಸಿ ‘ಕಾಳಮ್ಮ ನಗರ’ ಎಂದು ಉಳಿಸಿಕೊಳ್ಳಲಾಗಿತ್ತು. ಆದರೆ, ಕಿಡಿಗೇಡಿಗಳು ಮತ್ತೆ ಹೆಸರು ಬದಲಾಯಿಸಿದ್ದಾರೆ. ಪದೇಪದೇ ಈ ರೀತಿ ಮಾಡಲಾಗುತ್ತಿದ್ದು, ಕೆಲವರು ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಯುವವಾಹಿನಿ, ತ್ರಿಶೂಲ್ ಬಳಗ ಮತ್ತು ಬಿಜೆಪಿಯ ಮುಖಂಡರಾದ ಮಹೇಶ ನಾಯ್ಕ, ಸೊಮೇಶ್ವರ ನಾಯ್ಕ, ದಿಲೀಪ ಅಂಬಿಗ, ರಮೇಶ ಕಮ್ಮಾರ ಆಗ್ರಹಿಸಿದ್ದಾರೆ.