ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಎತ್ತರ ಪ್ರದೇಶದ ಗದ್ದೆಗಳಲ್ಲಿ ಭತ್ತದ ಬದಲಾಗಿ ಶೇಂಗಾವನ್ನು ಕೆಲವು ರೈತರು ಬೆಳೆಯುತ್ತಿದ್ದಾರೆ. ತಾಲ್ಲೂಕಿನ ಬೆಳಂಬಾರ, ಹೊಸಗದ್ದೆ ಸೇರಿದಂತೆ ಎತ್ತರ ಇರುವ ಗದ್ದೆಗಳಲ್ಲಿ, ಬೇಣದಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದ್ದವು. ಹೀಗಾಗಿ ಇಂಥ ಜಾಗದಲ್ಲಿ ಭತ್ತದ ಬದಲಾಗಿ ಶೇಂಗಾ ಬೆಳೆದಿದ್ದರು. ಬೆಳಂಬಾರ ಗ್ರಾಮದ ಗದ್ದೆಯಿಂದ ಇದೀಗ ಶೇಂಗಾವನ್ನು ಕೀಳುತ್ತಿದ್ದು, ಇಳುವರಿ ತೀವ್ರವಾಗಿ ಕುಸಿದಿದೆ.