ಇದಾದ ನಂತರ ಕೆಲವೇ ದಿನಗಳಲ್ಲಿ ನಗರಸಭೆಯ ಅಧ್ಯಕ್ಷ, ಪೌರಾಯುಕ್ತ ಹಾಗೂ ಇತರೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶೌಚಾಲಯದ ಛೇಂಬರ್ ದುರಸ್ತಿ ಮಾಡಿಸಿಕೊಟ್ಟಿದ್ದರು. ಬಳಿಕ ಸಾರ್ವಜನಿಕರೇ ಮತ್ತೆ ಅಧಿಕಾರಿಗಳಿಗಾಗಿ ಕಾಯದೇ, ತಾವೇ ನೀರಿನ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ವಾರ್ಡ್ ಸದಸ್ಯ ಪ್ರಶಾಂತ ಹರಿಕಂತ್ರ ಸೇರಿದಂತೆ ಅನೇಕರು ಶೌಚಾಲಯ ಶುಚಿಗೊಳಿಸಿ, ಉಪಯೋಗಕ್ಕೆ ಯೋಗ್ಯವಾಗಿರಿಸಿದರು.