ಹಾಸನ ಮೂಲದ ಕಿರಣ್ (30) ಈತನಿಗೆ ಸಣ್ಣಪುಟ್ಟ ಸುಟ್ಟಿರುವ ಗಾಯಗಳಾಗಿವೆ. ಬೇಕರಿ ಅಂಗಡಿಯ ಕೆಳಮಹಡಿಯಲ್ಲಿ ಬೇಕರಿ ಪದಾರ್ಥ ತಯಾರಿಸುವ ವೇಳೆ ಗ್ಯಾಸ್ಗೆ ಅಳವಡಿಸಿದ್ದ ಪೈಪ್ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದೆ. ಕೂಡಲೇ ಅಲ್ಲಿಂದ ಕಾರ್ಮಿಕ ಕಿರಣ್ ಗ್ಯಾಸ್ ಬಂದ್ ಮಾಡಿ, ಹೊರಗೆ ಓಡಿ ಬಂದಿದ್ದಾನೆ. ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದ ಕಿರಣ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಯ ವೈದ್ಯ ಡಾ.ಹಸನ್ ಬೀಳಗಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕಳಿಸಿದ್ದಾರೆ.