‘ಬಿಸಿಲಾಘಾತಕ್ಕೆ (ಸನ್ಸ್ಟ್ರೋಕ್) ಕೆಲವರು ಕುಸಿದು ಬಿದ್ದರೆ, ಆಯಾಸದಿಂದ ಇನ್ನೂ ಕೆಲವರು ನಿಶ್ಶಕ್ತರಾಗುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ವೃದ್ಧರು, ಮಹಿಳೆಯರು, ಮಕ್ಕಳು, ಅನಾರೋಗ್ಯ ಪೀಡಿತರು ಸುಡು ಬಿಸಿಲಿನಲ್ಲಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಹತ್ತಾರು ನಿಮಿಷ ಕಾಯಲು ಸಮಸ್ಯೆಯಾಗುತ್ತದೆ. ಈ ಎಲ್ಲ ಕಾರಣಗಳಿಂದ ಪಾಲಿಕೆಯು ನೆರಳಿನ ವ್ಯವಸ್ಥೆ ಮಾಡಿದ್ದು ಅನುಕೂಲಕಾರಿಯಾಗಿದೆ’ ಎಂದು ಉಪಮೇಯರ್ ದಿನೇಶ ಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.