ತಾಂಬಾ: ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತ ಮಹಿಳೆ ಭಾರತಿ ಹಣಮಂತ ಕೆಂಗನಾಳ ಅವರ ಕುಟುಂಬಕ್ಕೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮುಖ್ಯಮಂತ್ರಿ ಪರಿಹಾರ ಮತ್ತು ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ₹ 5 ಲಕ್ಷ ತಕ್ಷಣ ನೀಡಲು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಹೇಳಿದರು.
ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಕಂದಾಯ ನೀರಕ್ಷಕರು ಹುಸೇನಿ ಗುನ್ನಾಪೂರ, ಗ್ರಾಮ ಆಡಳಿತಧಿಕಾರಿ ಎಮ್.ಎಸ್. ಮಾರಲಾಬಾವಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ರಾಚಪ್ಪ ಗಳೇದ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.