ನಿಡಗುಂದಿ: ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಎಂಟು ಎಕರೆ ಗದ್ದೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಬೆಳೆಹಾನಿಯಾದ ಘಟನೆ ತಾಲ್ಲೂಕಿನ ಗೊಳಸಂಗಿ ಹತ್ತಿರ ರೈತರೊಬ್ಬರ ತೋಟದಲ್ಲಿ ಶನಿವಾರ ಜರುಗಿದೆ.
ತಾಲ್ಲೂಕಿನ ಗೊಳಸಂಗಿ ಗ್ರಾಮದ ಶಾಮರಾವ್ ಪುಂಡಲೀಕ ಜಾಧವ ಅವರ ಗದ್ದೆಯಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯಿಂದಾಗಿ 8 ಎಕರೆ ಗದ್ದೆಯಲ್ಲಿ ಅಲ್ಲಲ್ಲಿ ಉಳಿದಿದ್ದ ಕಬ್ಬು, 4 ಇಂಚು 20 ಅಡಿ ಉದ್ದದ 50 ಫಿನಾಲೆಕ್ಸ್ ಪೈಪುಗಳು, 30 ಬಾಳೆಗಿಡ, 10 ತೆಂಗಿನಮರ, ಕಾರಂಜಿಪೈಪು, ಹೊಂಡದ ಹಾಳೆ ಸೇರಿ ಹಾನಿಗೊಳಗಾಗಿವೆ ಎಂದು ತಿಳಿಸಲಾಗಿದೆ.