ಆಲಮೇಲ: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕಬ್ಬು ರೈತರ ಪ್ರತಿಭಟನೆ ಬುಧವಾರ ಅಂತ್ಯಗೊಂಡಿದೆ. ಕೆಪಿಆರ್ ಕಾರ್ಖಾನೆಗೆ ಬೀಗ ಹಾಕಿ ಧರಣಿ ನಡೆಸಲಾಗುತ್ತಿತ್ತು. ಕಳೆದ ವರ್ಷದಲ್ಲಿನ ಬಾಕಿ ಹಣದ ಪೈಕಿ ₹ 100 ನೀಡುವುದಾಗಿ ಕಾರ್ಖಾನೆ ಅಧಿಕಾರಿ ಗಂಗಾಧರ ಹುಕ್ಕೇರಿ ಘೋಷಿಸಿದರು. ಈ ವರ್ಷದ ಕಬ್ಬಿಗೆ ಇನ್ನುಳಿದ ಕಾರ್ಖಾನೆಗಳು ಎಷ್ಟು ದರ ನೀಡುತ್ತವೆ ಅಷ್ಟು ದರ ಪಾವತಿಸುವುದಾಗಿ ತಿಳಿಸಿದಾಗ ಕಬ್ಬು ಹೋರಾಟಗಾರರು ಧರಣಿ ಅಂತ್ಯಗೊಳಿಸಿದರು.